Saturday, August 17, 2013

Doodh Sagar: ಸೌಮ್ಯವಾದಿಯ ರುದ್ರನರ್ತನ

          ಗಾದತೆ  , ಬವ್ಯತೆ , ಬೀಕರ ಇವು ಪಶ್ಚಿಮ  ಘಟ್ಟಗಳ ಸಾಮಾನ್ಯ ವಿಶೇಶತೆ. ಇವಿಸ್ಟೆ  ಅಲ್ಲ ಈ  ನಿಗೂದ  ಕಾನನ ಸೃಷ್ಟಿಯಲ್ಲಿ  ಸೃಷ್ಟಿಕರ್ಥ ಇನ್ನಷ್ಟು  ಕುಂಚ ತೋಯ್ಧಿದಾನೆ.... ಅಂತಹ dynamic ವರ್ಣ ಚಿತ್ರವೇ DOODHSAGAR.

          ನೇಸರನಿನ್ನು ಹಾಜರಿ ಹಾಕದ ಇಳಿ ಮುಂಜಾನೆ, ಮಳೆ ಮಿಶ್ರಿತ ಕುಳಿರ್ಗಾಳಿ ಯಲ್ಲಿ ಹಿಪ್ಪಿ ಗಳಂತೆ ರೈಲ್ವೆ ಹಳಿಯಲಿಯಲ್ಲಿ ತಿರುಕರಂತೆ ಆ  ಸೌಮ್ಯವಾದಿಯ ದರ್ಶನಕ್ಕೆ ಹೊರಟ್ಟಿತ್ತು  ನಮ್ಮ ತಂಡ. ದಿಗಂತದೆತ್ತರದಿಂದ ದುಮ್ಮಿಕ್ಕುವ ಅಗಾದ ಜಲರಾಶಿ. ಅರ್ಭಟ ತಾಳಲಾರದೆ ಉಂಟಾದ ದಟ್ಟ ಮಂಜು, ಕಣ್ಣು ಹಾಯಿಸಿದಸ್ಟು ಕಾಣುವ ದಟ್ಟ ಅಡವಿ , ಕಾರ್ಗಲ್ಲು ನೀರು ಸರಸಕ್ಕೆ ತಲೆಧೂಗೋ ಮರಗಿಡ ಬಳ್ಳಿಯ ತಾನನ, ಗಜ ಗಾಂಬಿರ್ಯ ದಿಂದ ಘೀಲಿಡುತ್ತಾ ಸಾಗೊ ಗೂಡ್ಸ್ ರೈಲುಗಳು. ಇವೆಲ್ಲದರ ಮದ್ಯೆ ನಮ್ಮನ್ನು ಆವರಿಸಿದ  ಅವರ್ಣನೀಯ ಅದ್ಬುತ ರೋಮಾಂಚನ. "ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ, ಮಂಕುತಿಮ್ಮ "    ಎಂಬ ಉಕ್ತಿಯನ್ನು ನೆನಪಿಸಿತ್ತು. ಮಂಜಿನ  ಮಧ್ಯದಿಂದ ಹರಿಯುತಿಹ ಬೆಲ್ನೋರೆಯ ಮಾದರಿ ಜಲಸಾಗರ 'ದೋಧ್ ಸಾಗರ' ಎಂಬ ಅನ್ವರ್ಥ ನಾಮವನ್ನು ಸಾರ್ಥಕ ಗೊಳಿಸಿತ್ತು. 


         ಕರ್ನಾಟಕ-ಗೋವಾ ಗಡಿ ಬಾಗದಲ್ಲಿ ಬರುವ ಈ ಜಲಪಾತ ಮಳೆಕಾಡುಗಳಲ್ಲಿ ನಿಜವಾಗಲು ನೋಡಲೇ ಬೇಕಾದ ಸ್ಥಳ ಗಳಲ್ಲೊಂದು. ಬಾರತದ ೫ನೇ  ಅತಿ ಎತ್ತರದ ಜಲದಾರೆ ಗಳಲ್ಲೊಂದು ಎಂಬ  ಹಿರಿಮೆಗೂ  ಪಾತ್ರವಾಗಿದೆ ಇದು. ಇದರ  ಮದ್ಯೆ ನಿರ್ಮಿಸಿರುವ ರೈಲ್ವೆ  ಬ್ರಿಜ್ ನಮ್ಮ  ಇಂಜಿನಿಯರಿಂಗ್ ಕೌಶಲ್ಯಕ್ಕೆ  ಹಿಡಿದ  ಕೈಗನ್ನಡಿ. ಸದಾ  ಮೋಡಗಳಿಂದ ಅವೃತ್ತ ವಾದ  ಬೆಟ್ಟಗಳ  ತುದಿಯಿಂದ ದುಮ್ಮಿಕ್ಕುವ  ಈ  ಜಲಪಾತ ನಿಜವಾಗಲೂ ಕ್ಷೀರ ಸಾಗರವನ್ನು ನೆನಪಿಸುತ್ತದೆ. 


        ಇದು  ಎಷ್ಟು  ಇಷ್ಟ ವಾಗುತದೋ ಅಸ್ತೆ ಕಷ್ಟ  ಇಲ್ಲಿಗೆ ತೆರಳಲು ಪಡಬೇಕಾಗುತ್ತದೆ. ಇಲ್ಲಿ  ರೈಲ್ವೆ ಸಂಪರ್ಕ ಬಿಟ್ಟರೆ ಬೇರೆ ಯಾವುದೇ ಸಂಪರ್ಕಗಳಿಲ್ಲ ಹುಬ್ಬಳ್ಳಿ ಕಡೆಯಿಂದ  ಹೋದಾಗ  ಹಿಂದೆ ಸಿಗುವ ೧೪ ಕಿಮೀ ದೂರದ ಕಾಸಲ್ ರಾಕ್  ರೈಲ್ವೆ  ಸ್ಟೇಷನ್  ನಿಂದ ನಡೆಯಬೇಕಾಗುತ್ತದೆ. ಇಲ್ಲ  ನಂತರ ಸಿಗೋ ಸದರನ ಅಸ್ಟೆ  ದೂರದಲ್ಲಿರೋ ಕುಲೆಮ್ ಅನ್ನೋ ಸ್ಟೇಷನ್ ನಿಂದ  ಬರಬೇಕಾಗುತ್ತದೆ. ದೂದಸಾಗರ್  ಪಕ್ಕದಲ್ಲೇ ಅದೇ ಹೆಸರಿನ ನಿಲ್ದಾಣವಿದೆ ಆದರೆ  ಅಲ್ಲಿ  ಯಾವುದೇ ಅದಿಕೃತ ನಿಲುಗಡೆ  ಇರುವುದಿಲ್ಲ. ತಾಂತ್ರಿಕ  ಕಾರಣಗಳಿಗಾಗಿ ರೈಲ್  ಗಳು ಇಲ್ಲಿ ಕೇವಲ ೧ ನಿಮಿಷಗಳ ಕಾಲ ನಿಲುಗಡೆ ಗೊಲ್ಲುತವೆ ಆ  ಸಮಯದಲ್ಲಿ ಜಿಗಿದು ಕೊಂಡರೆ ೧೪ ಕಿಮೀ ಪಾದಸೇವೆ ಯನ್ನು ತಪ್ಪಿಸಬಹುದು. ಲಕ್ ಚೆನ್ನಾಗಿದ್ದರ ಹಿಂತಿರುಗುವಾಗ ಅಲ್ಲಿನ ಸ್ಟೇಷನ್ ಮಾಸ್ಟರ್ ಸಹಾಯದಿಂದ ಗೂಡ್ಸ್ ಗಾಡಿಯನ್ನು ಏರಬಹುದು.


  ಒಟ್ಟಿನಲ್ಲಿ ಅಗಾದ ವನರಾಶಿಯ ಮದ್ಯದಲ್ಲಿ , ಬೃಹತ್ ಜಲರಾಶಿಯ ಹಿನ್ನಲೆ ಯಲ್ಲಿ, ಕಣ್ಣು ಮುಚ್ಚಿಸೋ ಜಡಿಮಳೆಯಲ್ಲಿ , ನೀವು ನಡೆದರೂ ಓಡಿದರೊ  ಆಗದೆ  ರೈಲೆರಿದರೂ ಸದಾ  ಚಿತ್ತದಿ ಚಿತ್ರಿತ ವಾಗಿದೆ  ಆ   ಬ್ರಹ್ಮನ  ಅದ್ಬುತ  ಕುಂಚ.  ಮನಕೆ  ಮುತ್ತಿಕ್ಕುತದೆ ಕ್ರ್ಷೀರ ಸಾಗರದ ಮಂಜಿನ  ಸಿಂಚನ .